“ತಿಳಿಹೇಳುವ ನೀತಿಕಥೆಗಳು” – ಪ.ಪೂ. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಸ್ವಾಮಿಗಳವರ ನೀತಿಕಥೆಗಳ ಸಂಗ್ರಹ.
ಪುಸ್ತಕದ ಬಗ್ಗೆ – ಕಷ್ಟದಲ್ಲೂ ಸಮಾಧಾನವಾಗಿರುವುದು ಹೇಗೆ? ಸಂಪತ್ತು- ಸೌಕರ್ಯಗಳಿದ್ದರೂ ನಾವೇಕೆ ಅತೃಪ್ತರಾಗಿದ್ದೇವೆ? ಆಸೆಗಳಿದ್ದರೆ ಏನು ತೊಂದರೆ? ಎಲ್ಲವೂ ಪೂರ್ವನಿರ್ಧಾರಿತವೆ? ನಾವು ವಿಧಿ-ನಿಯತಿಯನ್ನು ಗೆಲ್ಲಬಹುದೇ? ಹೌದಾದರೆ, ಹೇಗೆ? ಅಮಾಯಕರಿಗೆ ದುಃಖ, ದುಷ್ಟರಿಗೆ ಏಳಿಗೆ – ಹೀಗೇಕೆ? ವಾಲಿಯ ವಧೆ ಅನ್ಯಾಯವಲ್ಲವೆ? ಸರಿ-ತಪ್ಪುಗಳನ್ನು ನಿರ್ಧರಿಸುವುದು ಹೇಗೆ? ಕೋಪದ ನಿಯಂತ್ರಣಕ್ಕೆ ಉಪಾಯವೇನು? ಪ್ರಬುದ್ಧ ಗುರುಗಳು ತಮ್ಮ ಶಿಷ್ಯರನ್ನು ಆಧ್ಯಾತ್ಮಿಕವಾಗಿ ಹೇಗೆ ಉದ್ಧರಿಸುತ್ತಾರೆ? ಕಪಟ ಗುರುಗಳಿಂದ ಮೊಸಹೋಗದಿರುವುದು ಹೇಗೆ? ಕರ್ಮಯೋಗ ಏಕೆ ಬೇಕು? ಅದರ ಅಭ್ಯಾಸ ಹೇಗೆ? ನಮ್ಮ ಆತ್ಮವನ್ನು ಹೇಗೆ ಅರಿಯಬೇಕು? “ಪ್ರಪಂಚ ಒಂದು ಭ್ರಾಂತಿ” – ಎಂಬೀ ವೆದಾಂತದ ನಿಲುವನ್ನು ಗ್ರಹಿಸುವುದು ಹೇಗೆ?
ನಮ್ಮನ್ನು ಕಾಡುವ ಇವೇ ಮತ್ತೂ ಅನೇಕ ಪ್ರಶ್ನೆಗಳಿಗೆ ಪ.ಪೂ. ಜಗದ್ಗುರು ಶ್ರೀ ಅಭಿನವ ವಿದ್ಯಾತಿರ್ಥ ಮಹಸ್ವಾಮಿಗಳವರು 100+ ನೀತಿಕಥೆಗಳ ಮೂಲಕ ತರ್ಕಬದ್ಧವಾಗಿ ಮನಮುಟ್ಟುವಂತೆ ತಿಳಿಹೇಳಿದ್ದಾರೆ. ಶ್ರೀ ಶೃಂಗೇರಿ ಶಾರದಾ ಪೀಠದ ಪ.ಪೂ. ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಸ್ವಾಮಿಗಳವರ ಮತ್ತು ಪ.ಪೂ. ವಿಧುಶೇಖರಭಾರತೀ ಸ್ವಾಮಿಗಳವರ ಅನುಗ್ರಹಗಳೊಂದಿಗೆ ಈ “ತಿಳಿಹೇಳುವ ನೀತಿಕಥೆಗಳು” ಹೊತ್ತಿಗೆಯನ್ನು ಹೊರತರಲಾಗಿದೆ.
246 ಪುಟಗಳ ಈ ಪುಸ್ತಕಕ್ಕೆ ರೂ 1೦೦.
ವಾಟ್ಸಾಪ್ ಮೂಲಕ ಪ್ರತಿಗಳಿಗಾಗಿ ಬೇಡಿಕೆಗಳನ್ನು ನೀಡಲು – +91 7397487666
ಆನ್-ಲೈನ್ ಪಾವ್ತಿಗೆ –
Centre for Brahmavidya
IFSC – HDFC0001875
A/c No. – 57500000451477
Centre for Brahmavidya
SVK Towers, 8th Floor
A23. Industrial Estate, Guindy
Chennai – 600032
Email: con…@centreforbrahmavidya.org
Web: www.centreforbrahmavidya.org
Leave a Reply